ಬದುಕೆಂದರೆ…

ಬದುಕೆಂದರೆ… ಹೀಗೇ…
ಬಳ್ಳಾರಿ ಬಿಸಿಲಿನಾ ಹಾಗೇ…
‘ಉಸ್ಸೆಪ್ಪಾ’,,, ಎಂದರೂ,
ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು!
ಝಣ ಝಣ… ಹಲಗೆ ಬಡಿತದ,
ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು!
ಮೈಮನ ಹಾವಿನಂಗೆ,
ಮುಲು ಮುಲು ಹರಿದಾಡುವ, ಬೇವ ಹನಿಯ ಕಂಪು!
ನೆಲಕೆ ಕಾಲಿಟ್ಟರೆ, ಕಮ್ಮಾರನ ತಿದಿಪಂಪು!
*

ಬದುಕೆಂದರೆ… ಹೀಗೇ
ಮುಂಗಾರಿನ ಮಳೆಯ ಹಾಗೇ…
ತೊಯ್ದು ತೊಪ್ಪೆಯೆಂದರೂ…
ಗಢ ಗಢ ಛಳಿಯೆಂದರೂ… ಬಿಡದು!
ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನಂತೇ…
ಜುಳು ಜುಳು ಹರಿವ ಸಿಟ್ಟೇರ ಹಳ್ಳದಂತೆ!
ಕರ್‍ಮಾಗಳ ಮುಳುಗಿಸಿ, ಧರ್‍ಮಾಗಳ ತೇಲಿಸೋ…
ನಮ್ಮೂರ ‘ಹುಚ್ಚಾಯಿ’, ತೇರನೆಳೆವ ಹರಕೆಯಂತೆ!!
ಬತ್ತಿ ಹೋದ ಕೆರೆ, ಬಾವಿ, ಹಗರಿಯಂತೆ.
*

ಬದುಕೆಂದರೆ… ಹೀಗೇ
ಚಿಕ್ಕ ಮಕ್ಕಳ ಮದುವೆಯಾಟದಂತೇ…
ನಮ್ಮೂರ, ಸಂತೆ ಮೈದಾನದ ವಹಿವಾಟಿನಂತೆ,
ಬೋರೇಗೌಡ, ಬೆಂಗಳೂರಿಗೆ ಬಂದ, ‘ಪಡಿಪಾಟ್ಲಿ’ನಂತೆ!
ಬಾಳೆಲೆ ಹಾಸುಂಡು, ಬೀಸಿ ಒಗೆದಂತೆ,
ಊರ ದನ ಕಾದು, ಊರಗೌಡ ಎನಿಸಿಕೊಂಡಂತೆ,
ನೀರ ಮೇಲಣ ಗುಳ್ಳೆಯಂತೆ!
*

ಬದುಕೆಂದರೆ… ಹೀಗೇ
ಬಡವರೂ ಬಡವರಾಗಿಯೇ ಇರುವುದು!
ಶ್ರೀಮಂತರೂ… ಇನ್ನೂ ‘ಮಜ್ಹಾ’ ಅನುಭವಿಸುವುದು!
ಕೋತಿ ತಿಂದರೂ… ‘ಮೇಕೆ’ ಪೆಟ್ಟು ತಿನ್ನುವಂತೆ,
ಚಾಡಿ ಮಾತಿಗೆ, ಕೋಡು ಮೂಡಿದಂತೆ,
ಸತ್ಯವಂತರೂ ಜೈಲು ಅನುಭವಿಸುವಂತೆ.
*

ಬದುಕೆಂದರೆ… ವಿಷ ವರ್ತುಲ! ಭಯಂಕರ! ‘ಕಟುಗಲರಟ್ಟಿ…’
ಪಾಂಡವರ… ಕೌರವರ… ಜೂಜಾಟದಂತೆ,
ಕಾಡುಕೋಣಗಳ ಗುದ್ದಾಟದಂತೆ!
ಶಕುನಿ, ದುರ್‍ಯೋಧನ, ಕೃಷ್ಣನ ಕುಟಿಲ ತಂತ್ರದಂತೆ,
ನಿತ್ಯ ಸ್ವಯಂವರವಿಲ್ಲಿ, ಟಗರಿನ ಕಾಳಗಿವಿಲ್ಲಿ…
ಅರಗಿನ ಮನೆಯ ವಾಸವಿಲ್ಲಿ, ಬೆನ್ನಿಗೆ ಚೂರಿ ಈರಿತವಿಲ್ಲಿ…
ವಸ್ತ್ರಾಪಹರಣ… ಕೀಚಕನ ಅಟ್ಟಹಾಸವಿಲ್ಲಿ!
ಆಗಿನ ನಿಯತ್ತು, ಈಗಿನವರತ್ತಿರವೆಲ್ಲಿದೆ?!
ಕತ್ತಲಾದರೆ… ಶಸ್ತ್ರವಿಡಿಯುತ್ತಿರಲಿಲ್ಲ! ರಾಜನೀತಿ…
ಈಗ ಕತ್ತಲಾದ ಮೇಲೆ, ಕತ್ತಿ ಇರಿವ ಜನರಿಲ್ಲಿ!
ರಕ್ತ ನೀತಿ…
*

ಬದುಕೆಂದರೆ… ಹೀಗೇ
ಹೀಗೆಂದು ಹೇಳಲು, ಈ ಕಲಿಯುಗದಲಿ,
ಹೇಗೆ ಸಾಧ್ಯವಿಲ್ಲವೋ ಹಾಗೇ…
ನಿತ್ಯ ಚಕ್ರವ್ಯೂಹ, ಕುರುಕ್ಷೇತ್ರವಿಲ್ಲಿ!
ಕೌರವರು, ಪಾಂಡವರೆಂಬಾಗೆರೆಯಿಲ್ಲ!
ಎಲ್ಲರೂ ಮಾಮರಿಲ್ಲಿ… ಮೃತ್ಯುಂಜಯರಿಲ್ಲಿ…
ಮನೆ, ಮನ, ಕಛೇರಿ, ಗುಡಿ, ಚರ್ಚು, ಮಸೀದಿ, ಯೆಲ್ಲ ರಣರಂಗವಿಲ್ಲಿ!
ಬಡವರ ಒಣ ಒಣ ನೆತ್ತರಿಗೆ, ಎಲ್ಲರೂ ಇಲ್ಲಿ ತಿಗಣೆಗಳೇ…!
*

ಬದುಕೆಂದರೆ… ಹೀಗೇ
ಕಾದ ರೊಟ್ಟಿ ಹೆಂಚು! ನಿಗಿ ನಿಗಿ ಉರಿವ ಕಿಚ್ಚು…
ರಾವಣರ ಸಂಚು, ಕೈಕೆ, ಮಂಥರೆ ಸಂಚು…
ಸೀತೆವನವಾಸಕೆ ಅಟ್ಟಿದಾ ಹಾಗೇ…
ಕಲಿಯುಗದಲ್ಲಿ… ರಾಮಾಯಣ, ಮಹಾಭಾರತ ಒಟ್ಟೊಟ್ಟಿಗೆ!
ತಣ್ಣೀರು ಆರಿಸಿ, ಕುಡಿವ ಕಾಲ!
ಬದುಕೆಂದರೆ… ಬಲು ಭಾರ! ಖಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ್ನಣೆ
Next post ಓಲೆಗೊಂದು ಓಲೆ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys